ಗುಮ್ಮಾನನ್ನುಕಂಡರೆ ಬೆಚ್ಚಿ ಬಿದ್ದು, ದೂರಓಡುತಿದ್ದ ಮನಸುಗಳೆಲ್ಲಾ ಈ ಮುಗ್ಧ ಗುಮ್ಮಾನನ್ನು ನೋಡಿ ಹೆಗಲಿಗೇರಿಸಿಕೊಂಡು ಮುದ್ದಾಡಲು ಮುಂದಾಗುತ್ತಿವೆ! ಈ ಪಾಪು ಗುಮ್ಮನ ನಗುವಿನ ಮೋಡಿಗೆ ಮನಸೋತು ನಿಲ್ಲುತ್ತಿವೆ.ಇದೇನಿದುಗುಮ್ಮಾನನ್ನೇ ಪ್ರೀತಿಸಲು ಪ್ರಾರಂಭಿಸಿದರಾ ಎಂದರೆ ಹೌದುಎನ್ನುತ್ತಿದೆಜೀಕನ್ನಡ ವಾಹಿನಿಯ ಅಂಜಲಿ ಧಾರವಾಹಿ ತಂಡ. ಮುದ್ದು ಮುಖಹೊತ್ತು, ನಗುತ್ತಾ, ತನ್ನ ಪುಟಾಣಿ ಸ್ನೇಹದ ಬಳಗವನ್ನೂ ನಗಿಸುತಾ, ಮ್ಯಾಜಿಕ್ ಮೋಡಿಗಳನ್ನು ಮಾಡುತ್ತಾಎಲ್ಲರನ್ನೂರಂಜಿಸುವ ಶಕ್ತಿಯುತ ಈಗುಮ್ಮಾಕಿರುತೆರೆಯ ಪರದೆಯ ಮೇಲೆ ಅಂಜಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.
ಧನಾತ್ಮಕ ಅಂಶಗಳನ್ನು ನೆನೆಸಿಕೊಂಡು ಮಾತನಾಡುವ ಮುದ್ದುಆತ್ಮವೊಂದುಏಂಜೆಲ್ರೂಪದಲ್ಲಿಅಂಜಲಿಯಾಗಿಕಿರುತೆರೆಯ ಮೇಲೆ ಬರಲಿದೆ. ಪ್ರಸ್ತುತಜೀವನದ ವಾಸ್ತವತೆಯನ್ನು ತಿಳಿದು ಬದುಕನ್ನು ಅರಿತುಕೊಳ್ಳ ಬಯಸುವಜೀವವೊಂದರಕಥೆಯನ್ನು ಹೇಳ ಹೊರಟಿದೆ ಅಂಜಲಿ ಧಾರಾವಾಹಿ. ಈ ಅಂಜಲಿ ಎಲ್ಲಾ ಧಾರವಾಹಿಗಳಲ್ಲಿ ಕಾಣಸಿಗುವ ಕಥಾ ಹಂದರವನ್ನೇ ಮುಂದಿಟ್ಟುಜನರ ಮುಂದೆ ಬರುತ್ತಿರುವವಳಲ್ಲಾ. ಇದೊಂದು ಮೆಘಾ ಸೀರಿಯಲ್ ಅಲ್ಲದ ಮೆಘಾ ಕಥೆ! ಹೊಸಾ ಕಥಾ ಹಂದರವನ್ನು ಬಿಚ್ಚಿಡುತ್ತಿರುವ ನವೀನ ಪ್ರಯತ್ನ ಈ ಧಾರಾವಹಿಯಲ್ಲಾಗುತ್ತಿದೆ. ರುತು, ಶಿವ ಧ್ವಜ, ಮಧು ಹೆಗಡೆ ಮುಂತಾದ ಸಿನಿಮಾ ತಾರಾಬಳಗವೇ ಈ ಧಾರಾವಾಹಿಯಲ್ಲಿಅಭಿನಯಿಸುವ ಮೂಲಕ ಕಿರುತೆರೆಯ ವೀಕ್ಷಕರಿಗೆಹೊಸ ಹುರುಪುತಂದುಕೊಡುತ್ತಿದೆ. ೫ ವರ್ಷದ ಮುದ್ದು ಪುಟಾಣಿ ಶ್ರಿತಾ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.
ಈ ಧಾರವಾಹಿ ಎಲ್ಲ ಕಥೆಗಳಂತೆ ಹಾರರ್ ವಿಷಗಳನ್ನೇ ಹೇಳುತ್ತಿರುವಂತದ್ದಲ್ಲ. ಈ ಅಂಜಲಿ ಮಕ್ಕಳನ್ನು ಮೆಚ್ಚಿಸುವ ಮುದ್ದುಗುಮ್ಮ! ಭಯ ಪಡಿಸಿ ಮಕ್ಕಳನ್ನು ಹೆದರಿಸದೇ ಮ್ಯಾಜಿಕ್ ಮೂಲಕ ತನ್ನ ಸೂಪರ್ ನ್ಯಾಚುರಲ್ ಶಕ್ತಿಯ ಮೂಲಕ ಮಕ್ಕಳ ಮನಸನ್ನುಗೆದ್ದುಎಲ್ಲರಿಗೂ ಇಷ್ಟವಾಗುವಂತವಳು ಎನ್ನುತ್ತಾರೆ. ನಿರ್ದೇಶಕ ದಿಲೀಪ್ಕುಮಾರ್ ಎಂ. ಸಿ.
ಜೀಕನ್ನಡ ವಾಹಿನಿ ಸದಾ ಹೊಸ ಕಥೆಗಳನ್ನು ಹೊತ್ತುತಂದು, ಕಿರುತೆರೆಯ ಪರದೆಗೆ ಹೊಸ ಹುರುಪುಕೊಟ್ಟಿರುವಂತದ್ದು. ಅಂತೆಯೇ ಈಗ ನವನವೀನ ಕಥಾ ವಸ್ತುವುಳ್ಳ ಧಾರಾವಾಹಿಯನ್ನು ವೀಕ್ಷಕರಮುಂದೆತಂದಿಡುತ್ತಿದೆ. ಕನ್ನಡಕಿರುತೆರೆಯಲ್ಲಿ ಹೊಸ ಪ್ರಯತ್ನದಂತೆಧಾರಾವಾಹಿಗೆಂದೇ ಲಕ್ಷಾಂತರರೂಪಾಯಿಯ ಸೆಟ್ ಸಿದ್ಧವಾಗಿ ಶೂಟಿಂಗ್ ನಡೆಯುತ್ತಿದೆ. ಪುಟಾಣಿ ಅಂಜಲಿಯನ್ನು ವೀಕ್ಷಕರ ಮುಂದೆಕರೆತಂದುಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆಜೀಕನ್ನಡ ವಾಹಿನಿಯಒಗ್ಗರಣೆಡಬ್ಬಿಖ್ಯಾತಿಯ ಮುರುಳಿ.
ಮುರುಳಿ ನಿರ್ಮಾಣ ಮಾಡುತ್ತಿರುವ ಈ ಧಾರವಾಹಿಯನ್ನು ದಿಲೀಪ್ಕುಮಾರ ಸಿ. ಎಮ್. ನಿರ್ದೇಶಲಿದ್ದಾರೆ. ರವಿಕುಮಾರಗುಬ್ಬಿಛಾಯಾಗ್ರಹಣದೊಂದಿಗೆ, ಆನಂದ್ ಅನಿವರ ಸಂಕಲನದೊಂದಿಗೆ, ಕಾರ್ತಿಕ್ ಶರ್ಮ ಸಂಗೀತದಲ್ಲಿ ಮೂಡಿ ಬರುತ್ತಿದೆಧಾರಾವಾಹಿ. ಎಲ್ಲ ವಿಶಿಷ್ಟ ಅಂಶಗಳೊಂದಿಗೆ ಅಕ್ಟೋಬರ್ ೩ ರಿಂದ ಸಂಜೆ ೬ಕ್ಕೆ ವೀಕ್ಷಕರ ಮನಗೆಲ್ಲಲು ಮುಗ್ಧ ನಗುವನ್ನು ಹೊತ್ತು ಬರುತ್ತಿದ್ದಾಳೆ ಮುದ್ದುಗುಮ್ಮಅಂಜಲಿ.